ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರಾದ ರಮೇಶ್ ಅರವಿಂದ್ ಇವರು ಜನಿಸಿದ್ದು ಸೆಪ್ಟೆಂಬರ್ 10, 1964ರಲ್ಲಿ . ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಜೀನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ತಮ್ಮ ಕಾಲೇಜು ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಿನಿಮಾ ಸೇರುವ ಆಸಕ್ತಿಯನ್ನು ಬೆಳೆಸಿಕೊಂಡರು.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ “ಹೂಮಳೆ” ಮತ್ತು “ಅಮೃತಧಾರೆ” ಚಿತ್ರಕಥೆಗೆ ನೆರವು ನೀಡಿದ್ದಾರೆ.ಸುಂದರ ಸ್ವಪ್ನಗಳು ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಸುಂದರ ನಟ ರಮೇಶ್ ಅರವಿಂದ್ ಕೆ ಬಾಲಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ನಟ ರಾಮೇಶ್ವರಂ ಸಿನಿ
ಪಂಡಿತರಲ್ಲಿ ಕನ್ನಡಕ್ಕೆ ಒಬ್ಬ ಉತ್ತಮ ನಟ ಸಿಕ್ಕ ಎಂಬಂತೆ ನಟಿಸಿದ್ದರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ನಟ ರಮೇಶ್ ಅರವಿಂದ್ ಅವರು ಇಂಜಿನಿಯರಿಂಗ್ ಪದವಿದಾರರಾಗಿದ್ದ ರಮೇಶ ಅರವಿಂದ್ ಅವರಿಗೆ ಆಸಕ್ತಿ ಇದ್ದದ್ದು ಮಾತ್ರ ನಟನಾ ಕ್ಷೇತ್ರದಲ್ಲಿ ಸಿನಿಮಾ ಕ್ಷೇತ್ರದಲ್ಲಿ ತಾನೊಬ್ಬ ಉತ್ತಮ ನಟನಾಗಿ ಬೆಳೆಯಬೇಕು ಎಂಬ ಅವರ ಕನಸು ನನಸಾಯಿತು.
ಸಿನಿಮಾದ ಬಗ್ಗೆ ಎಲ್ಲ ಕನಸುಗಳು ಸ್ವಪ್ನಗಳಾಗಿ ಉಳಿಯದೆ ನನಸಾಗಿ ಬದುಕನ್ನು ಸಡಿಲಗೊಳಿಸಿದವು. 1990ರ ದಶಕದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. 1990 ನಂತರ ಇವರ ನಾಯಕತ್ವದಲ್ಲಿ ಮೂಡಿ ಬಂದ ಚಿತ್ರ ತುಂಬಾ ಕಂಡಿದ್ದವು. ಕರ್ಪೂರದ ಗೊಂಬೆ ನಮ್ಮೂರ ಮಂದಾರ ಹೂವೆ ಮುಂಗಾರಿನ ಮಿಂಚು ಶ್ರೀಗಂಧ ರಂಗಿನಹಳ್ಳಿಯಲ್ಲಿ ರಂಗಿ ದಾರ ರಂಗೇಗೌಡ ಮುಂತಾದ ಚಿತ್ರಗಳು ಪ್ರೇಕ್ಷಕರ ಅಚ್ಚುಮೆಚ್ಚಿನ ಚಿತ್ರಗಳು ಅದಾವು.
ನಮ್ಮೂರ ಮಂದಾರ ಹೂವೆ ಅಮೃತವರ್ಷಿಣಿ ಅಮೆರಿಕ ಅಮೆರಿಕ ಚಂದ್ರಮುಖಿ ಪ್ರಾಣಸಖಿ ತುತ್ತ ಮುತ್ತ ಈ ಚಿತ್ರಗಳಲ್ಲಂತೂ ರಮೇಶ್ ಅರವಿಂದ್ ಅವರ ಅಭಿನಯ ಇಂದಿಗೂ ಯಾರಿಂದಲೂ ಮರೆಯುವುದಕ್ಕೆ ಸಾಧ್ಯವಿಲ್ಲ ಈ ಎಲ್ಲಾ ಸಿನಿಮಾಗಳನ್ನು ಸಹ 10 ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತದೆ. ಪ್ರೀತಿಯನ್ನು ತ್ಯಾಗ
ಮಾಡುವಂತಹ ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದ ರಮೇಶ ಅರವಿಂದ್ ತ್ಯಾಗರಾಜನ್ ಎಂಬ ಬಿರುದನ್ನು ಪಡೆದರು ನಂತರ ಒಂದೇ ಪಾತ್ರಕ್ಕೆ ಸೀಮಿತವಾಗಿರದೆ ಹಾಸ್ಯ ಬರೆದ ಕಥೆಗಳನ್ನು ಆಯ್ದುಕೊಂಡು ಜನರಲ್ಲಿ ನಗೆಯ ಹೊನಲನ್ನು ಹರಿಸಿದರು ರಮೇಶ್ ಅರವಿಂದ್. ಉಲ್ಟಾ ಪಲ್ಟಾ ಚಿತ್ರದಲ್ಲಿನ ಇವರ ನಟನೆಗೆ ಲಕ್ಷ ಬಾರಿ ಚಪ್ಪಾಳೆಯನ್ನು ತಟ್ಟಿದ್ದರು ಕೂಡ ಕಂಡಿದೆ.